ಯಕ್ಷಗಾನ ಕ್ಷೇತ್ರದಲ್ಲಿ ಪ್ರಮುಖ ಹೆಸರು ನನ್ನಮ್ಮ ಲೀಲಾ ಬೈಪಾಡಿತ್ತಾಯ. ಮೂಲತಃ ತೆಂಕು ತಿಟ್ಟಿನವರಾದರೂ, ಬಡಗು ಯಕ್ಷಗಾನ ರಂಗಸ್ಥಳದಲ್ಲಿ ಅವರು (ಶ್ರೀಕೃಷ್ಣ ಪಾರಿಜಾತ ಪ್ರಸಂಗ) ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಮದ್ದಳೆಯಲ್ಲಿ ನಮ್ಮ ತಂದೆ ಹರಿನಾರಾಯಣ ಬೈಪಾಡಿತ್ತಾಯ, ಚೆಂಡೆಯಲ್ಲಿ ತೆಂಕು-ಬಡಗಿನ ನುಡಿತಗಳನ್ನು ಕರಗತ ಮಾಡಿಕೊಂಡಿರುವ ಶಿವಾನಂದ ಕೋಟ. ಇದು 2015ರಲ್ಲಿ ಕಾರ್ಕಳದಲ್ಲಿ ಯಕ್ಷ ಚಂದ್ರಿಕೆ ಶಶಿಕಾಂತ ಶೆಟ್ಟರು ಆಯೋಜಿಸಿದ ಆಟ.
ಇವನ್ನೂ ನೋಡಿ
ಮೊಬೈಲ್ ಇರೋದು ಮಕ್ಳ್ ಕೈಲಲ್ವೇ?
"ಪುಟ್ಟಾ, ಎಷ್ಟೂಂತ ಆ ಮೊಬೈಲ್ ಫೋನ್ ಬಳಸ್ತೀಯಾ?"
"ಇಲ್ಲಮ್ಮಾ, ಚೂರೇ ಚೂರು. ಒಂದ್ಗಂಟೆ ಮಾತ್ರ"
***
"ಬೋರಾಗ್ತಿದೆ, ಮೊಬೈಲ್ ಕೊಡಮ್ಮಾ"
"ಫ್ರೆಂಡ್ಸೆಲ್ಲ ಮೊಬೈಲ್ ಆಡ್ತಾರೆ, ನಂಗ್ಯಾಕಮ್ಮಾ ಬಿಡಲ್ಲ?"
"ಇಲ್ಲಮ್ಮ, ಇನ್ನೂ ಒಂದು ಗಂಟೆ ಆಗಿಲ್ಲ, ತಡಿ"
***
"ಅಪ್ಪ ನೋಡಿದ್ರೆ ಯಾವಾಗ್ಲೂ ಮೊಬೈಲ್...