ಯಕ್ಷಗಾನ ಕ್ಷೇತ್ರದಲ್ಲಿ ಪ್ರಮುಖ ಹೆಸರು ನನ್ನಮ್ಮ ಲೀಲಾ ಬೈಪಾಡಿತ್ತಾಯ. ಮೂಲತಃ ತೆಂಕು ತಿಟ್ಟಿನವರಾದರೂ, ಬಡಗು ಯಕ್ಷಗಾನ ರಂಗಸ್ಥಳದಲ್ಲಿ ಅವರು (ಶ್ರೀಕೃಷ್ಣ ಪಾರಿಜಾತ ಪ್ರಸಂಗ) ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಮದ್ದಳೆಯಲ್ಲಿ ನಮ್ಮ ತಂದೆ ಹರಿನಾರಾಯಣ ಬೈಪಾಡಿತ್ತಾಯ, ಚೆಂಡೆಯಲ್ಲಿ ತೆಂಕು-ಬಡಗಿನ ನುಡಿತಗಳನ್ನು ಕರಗತ ಮಾಡಿಕೊಂಡಿರುವ ಶಿವಾನಂದ ಕೋಟ. ಇದು 2015ರಲ್ಲಿ ಕಾರ್ಕಳದಲ್ಲಿ ಯಕ್ಷ ಚಂದ್ರಿಕೆ ಶಶಿಕಾಂತ ಶೆಟ್ಟರು ಆಯೋಜಿಸಿದ ಆಟ.
ಇವನ್ನೂ ನೋಡಿ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
ಸುವರ್ಣ ಕನ್ನಡ ರಾಜ್ಯೋತ್ಸವ ಆಚರಿಸಿದ ಎರಡು ವರ್ಷಗಳ ಬಳಿಕ ಕರುನಾಡಿನ ಮಗದೊಂದು ಸುವರ್ಣ ಅಧ್ಯಾಯ ಆರಂಭವಾಗಿದೆ. ಪಂಚಕೋಟಿ ಕನ್ನಡಿಗರ ಆಡುಭಾಷೆಯಾದ, ನಲ್ನುಡಿ, ಹೊನ್ನುಡಿ, ಚೆನ್ನುಡಿಯಾದ ಕನ್ನಡ ನುಡಿಗೆ ಸಿಗಲೇಬೇಕಾಗಿದ್ದ ಮನ್ನಣೆಯೊಂದು ದೊರಕಿದ ಸುವರ್ಣ...