ಯಕ್ಷಗಾನ ಕ್ಷೇತ್ರದಲ್ಲಿ ಪ್ರಮುಖ ಹೆಸರು ನನ್ನಮ್ಮ ಲೀಲಾ ಬೈಪಾಡಿತ್ತಾಯ. ಮೂಲತಃ ತೆಂಕು ತಿಟ್ಟಿನವರಾದರೂ, ಬಡಗು ಯಕ್ಷಗಾನ ರಂಗಸ್ಥಳದಲ್ಲಿ ಅವರು (ಶ್ರೀಕೃಷ್ಣ ಪಾರಿಜಾತ ಪ್ರಸಂಗ) ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಮದ್ದಳೆಯಲ್ಲಿ ನಮ್ಮ ತಂದೆ ಹರಿನಾರಾಯಣ ಬೈಪಾಡಿತ್ತಾಯ, ಚೆಂಡೆಯಲ್ಲಿ ತೆಂಕು-ಬಡಗಿನ ನುಡಿತಗಳನ್ನು ಕರಗತ ಮಾಡಿಕೊಂಡಿರುವ ಶಿವಾನಂದ ಕೋಟ. ಇದು 2015ರಲ್ಲಿ ಕಾರ್ಕಳದಲ್ಲಿ ಯಕ್ಷ ಚಂದ್ರಿಕೆ ಶಶಿಕಾಂತ ಶೆಟ್ಟರು ಆಯೋಜಿಸಿದ ಆಟ.
ಇವನ್ನೂ ನೋಡಿ
ಅಂಧರ ಬೆಳಕು – ಹೆಲನ್ ಕೆಲ್ಲರ್
ಗಾಢಾಂಧಕಾರದೊಳು ಅಡಿಗಡಿಗೆ ನಲುಗುತ್ತ
ನಲಿವ ಮರೆಯುತ ನೋವಿನಲೆ ಹೈರಾಣಾಗುತ್ತ ಬಳಬಳಲಿ ಬೆಂಡಾದ ದೃಷ್ಟಿಹೀನರ ಮನೆಗೆ
ಜ್ಯೋತಿಯಾದವಳಲ್ಲವೇ ಹೆಲನ್ ಕೆಲ್ಲರ್! ಶ್ರವಣ-ದೃಷ್ಟಿಯ ನೈಜ ಸಾಮರ್ಥ್ಯವರಿಯದೆ
ದಾರಿಗಾಣದೆ ಬದುಕ ಕಳೆದುಕೊಂಡವರಿಂಗೆ ಹೊಚ್ಚಹೊಸ ಬಾಳ ಕಟ್ಟಲು ನವನವೀನತೆಯ
ದಾರಿತೋರಿದ ಮಾತೆಯಲ್ಲವೆ ಹೆಲನ್ ಕೆಲ್ಲರ್! ಆನ್ನೆ ಸುಲಿವಾನ್ ಹಾಯ್ಸಿದ ಜಲ...