ಹೃದಯದ ಗಾಯಕ್ಕೆ ಮದ್ದುಂಟೇ?

ಸುಮ್ಮನೆ ಹೀಗೇ ಕುಳಿತಿದ್ದಾಗ ಮನಸ್ಸಿಗೆ ಅನಿಸಿದ್ದು:

ಛಿದ್ರವಾದ ಬಳಿಕವೂ ಕೆಲಸ ಮಾಡಬಲ್ಲ ಏಕೈಕ ಉಪಕರಣ ಎಂದರೆ ಹೃದಯ.

ಮರಳಿ ಬಾಲ್ಯಕ್ಕೆ ಹೋಗೋಣ ಅಂತ ಒಂದೊಂದು ಬಾರಿ ಅನಿಸುತ್ತಲೇ ಇರುತ್ತದೆ. ಯಾಕೆ ಗೊತ್ತೇ? ಒಡೆದ ಹೃದಯಕ್ಕಿಂತಲೂ ಮುರಿದ ಕೈಕಾಲುಗಳನ್ನು ಜೋಡಿಸುವುದು ಸುಲಭ!

ಮಾತ್ರವಲ್ಲ, ಕಾಲುಗಳಿಗೆ ಬಿದ್ದು ಪೆಟ್ಟು ಮಾಡಿಕೊಂಡಾಗ ಮುಲಾಮು ಹಚ್ಚಿ ಗುಣಪಡಿಸಬಹುದು. ಹೃದಯಕ್ಕಾದ ಗಾಯಕ್ಕೆ ಮದ್ದಿಲ್ಲ!

8 thoughts on “ಹೃದಯದ ಗಾಯಕ್ಕೆ ಮದ್ದುಂಟೇ?

  1. ಹೌದಲ್ವಾ? ಹೊಳೆದೇ ಇರಲಿಲ್ಲ. ಒಡೆದರೂ ಚೈತನ್ಯವಿರುವವರೆವಿಗೂ ಹೃದಯ ಕೆಲಸ ಮಾಡಬಲ್ಲದು. ಆದರೆ ಮುರಿದ ಕೈ ಕಾಲುಗಳಂತೆ ರಿಪೇರಿ ಮಾಡಲು ಸ್ವಲ್ಪ ಕಷ್ಟ ಅಲ್ವಾ.

    ಮರಳಿ ಬಾಲ್ಯಕ್ಕೆ ಹೋಗೋದಕ್ಕಾಗಲ್ಲ, ಹಾಗೆಯೇ ಮುಂಬರುವ ಕಾಲಕ್ಕೂ ಹೋಗೋಕ್ಕಾಗಲ್ಲ. ಆದರೆ ಪ್ರಾಣ್ ಅವರು ಬರೆಯುತ್ತಿದ್ದ ಡಾಬೂ ಕಾಮಿಕ್ ನಲ್ಲಿ ಭೂತಕಾಲ ಮತ್ತು ಭವಿಷ್ಯತ್ತುಕಾಲಗಳಿಗೆ ಹೋಗಲು ಕಾಲಕೋಶ ಯಂತ್ರವೊಂದರ ಬಗ್ಗೆ ಬರೆದಿದ್ದರಲ್ವಾ?

    ಇದೇ ವಿಷಯದ ಬಗ್ಗೆ ಒಂದು ಲೇಖನ ಬರೆಯಿರಿ (ಸಮಯವಾದಾಗ) – ಒಳ್ಳೆಯ ವಿಷಯ.

  2. ಹೌದು ಶ್ರೀನಿವಾಸ್,
    ಮುಂದೆಯೂ ಹೋಗಲಾಗದೆ, ಹಿಂದಕ್ಕೂ ಬರಲಾಗದೆ ನಮ್ಮದು ತ್ರಿಶಂಕು ಸ್ಥಿತಿಯೇ ಆಗಿದೆಯಲ್ವಾ?

  3. ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ ಪ್ರಕಾಶ್.

    ನಿಮಗೆ ಹೇಗೆ ತಿಳಿಯಿತು ಈ ಬ್ಲಾಗು ಅಂತ ನನಗೆ ಕುತೂಹಲ.

  4. ಈ ಬ್ಲಾಗು ಹೇಗೆ ಇತರರಿಗೆ ಗೊತ್ತಾಯ್ತು ಎಂಬ ಕುತೂಹಲವೇ?

    ಶ್ರೀಗಂಧದ ಕೊರಡನ್ನು ಎಷ್ಟೇ ಭದ್ರ ಮಾಡಿಟ್ಟರೂ ಸುವಾಸನೆ ಹೊರಬರಲಾರದೀತೇ?

    ಕನ್ನಡ ನಾಡಿಗೆ ಬದಲಾವಣೆಯ ಅಗತ್ಯವಿದೆ. ಬರಿ ಬೊಗಳಿಕೆಯಲ್ಲ.

  5. Soni
    ನನ್ನ ಪುಟ್ಟ ಗೂಡಿಗೆ ಸ್ವಾಗತ
    ಮನುಷ್ಯ ಜೀವನದಲ್ಲಿ ಪ್ರೀತಿ ಯಾವತ್ತೂ ಮೇಲೆಯೇ ಅಲ್ವೇ, ಅದಕ್ಕೇ ಅದ್ರ ಮೇಲೇ ಬರೀತೀನಿ.
    🙂

  6. ಶ್ರೀನಿವಾಸರೇ,
    ಪರವಾಗಿಲ್ಲ, ಈ ಬ್ಲಾಗು ಓಡಲಾರಂಭಿಸಿದ್ದು ಸಂತೋಷವಾಗ್ತಿದೆ.
    ಮತ್ತೆ ಅಪ್ ಡೇಟ್ ಮಾಡುವ ಅನಿವಾರ್ಯತೆಯೂ ಬಂದ್ಬಿಟ್ಟಿದೆ. 🙂

Leave a Reply

Your email address will not be published. Required fields are marked *