ಇತ್ತೀಚೆಗೆ ಟೆಲಿಕಾಂ ಕಂಪನಿಗಳ ನಡುವಿನ ಸಂಪರ್ಕಕ್ಕೆ ಇದ್ದ ಅಂತರ್-ಸಂಪರ್ಕ ಶುಲ್ಕವನ್ನು (ಐಯುಸಿ- ಇಂಟರ್-ಕನೆಕ್ಟ್ ಯೂಸೇಜ್ ಚಾರ್ಜ್) ಕಡಿತಗೊಳಿಸಿದ ಸುದ್ದಿ ಓದಿದ್ದೀರಿ. ಇದರಿಂದ ಕರೆ ದರಗಳು ಮತ್ತಷ್ಟು ಅಗ್ಗವಾಗುವ ನಿರೀಕ್ಷೆ ಇದೆ. ಏನಿದು ಅಂತ ಗೊತ್ತೇ? ಒಂದು ಟೆಲಿಕಾಂ ಕಂಪನಿಯ ಕರೆಯೊಂದು ಬೇರೊಂದು ಟೆಲಿಕಾಂ ಸೇವಾದಾತ ಕಂಪನಿಯ ನೆಟ್ವರ್ಕ್ಗೆ (ಸುಲಭವಾಗಿ ಉದಾಹರಣೆ ಹೇಳುವುದಿದ್ದರೆ, ಏರ್ಟೆಲ್ನಿಂದ ಜಿಯೋಗೆ) ಹೋಗುತ್ತದೆಯೆಂದಾದರೆ, ಅದಕ್ಕೆ ಮೊದಲನೆ ಕಂಪನಿಯು ಎರಡನೇ ಕಂಪನಿಗೆ ನಿಮಿಷಕ್ಕೆ ಇದುವರೆಗೆ 14 ಪೈಸೆ ಕೊಡಬೇಕಾಗುತ್ತಿತ್ತು. ಈಗ ಅದನ್ನು 6 ಪೈಸೆಗೆ ಇಳಿಸಲಾಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಯೋಜನೆಯ ಪ್ರಕಾರ, 2020ರಲ್ಲಿ ಇದು ಶುಲ್ಕರಹಿತವಾಗಲಿದೆ. ಆದರೆ, ಟೆಲಿಕಾಂ ಸೇವಾ ಕಂಪನಿಗಳು ಯಾರ ಕರೆ ಎಲ್ಲಿಗೆ ಹೋಯಿತು ಎಂಬುದರ ದಾಖಲೆ ಇರಿಸಿಕೊಳ್ಳಬೇಕಾಗುತ್ತದೆ.
ಇವನ್ನೂ ನೋಡಿ
‘ಉತ್ತರಾಯಣ’ದಲ್ಲಿ ‘ಹೆಜ್ಜೆ ಗುರುತು’ ಉಳಿಸಿ ಹೋದ ನಿ.ವ್ಯಾಸರಾಯ ಬಲ್ಲಾಳ
ಕತೆ, ಕಾದಂಬರಿಗಳ ಮೂಲಕ ವಾಸ್ತವ ಜಗತ್ತಿನ ಚಿತ್ರಣವನ್ನು ಅದ್ಭುತವಾಗಿ ಬಿಡಿಸಿಡುತ್ತಿದ್ದ, ಮಾನವೀಯ ಆದರ್ಶಗಳನ್ನು ಮನಮುಟ್ಟುವಂತೆ ಬಿಂಬಿಸುತ್ತಿದ್ದ, ಕನ್ನಡ ಸಾಹಿತ್ಯ ಲೋಕದಲ್ಲಿ "ಬಂಡಾಯ ಬಲ್ಲಾಳರು" ಎಂದೇ ಜನಜನಿತರಾಗಿದ್ದ ಕವಿ ಮನಸಿನ ನಿ.ವ್ಯಾಸರಾಯ ಬಲ್ಲಾಳರೀಗ ನಮ್ಮೊಂದಿಗಿಲ್ಲ....



