ಕಳವಾದ ಅಥವಾ ಎಲ್ಲೋ ಕಳೆದು ಹೋದ ಫೋನ್ಗಳು ಮರಳಿ ಸಿಗುವುದು ತೀರಾ ತ್ರಾಸದಾಯಕ. ಆದರೆ ಅವುಗಳಲ್ಲಿರುವ ಅಮೂಲ್ಯ ಮಾಹಿತಿಯದ್ದೇ ಚಿಂತೆ. ಫೋನ್ ಸಿಗದಿದ್ದರೂ ಪರವಾಗಿಲ್ಲ, ಅದರೊಳಗಿರುವ ಮಾಹಿತಿಯು ಕಳ್ಳರ ಪಾಲಾಗಬಾರದು ಎಂದುಕೊಳ್ಳುವವರೂ ಇದ್ದಾರೆ. ಇದೀಗ ಯಾವುದೇ ಸ್ಮಾರ್ಟ್ ಫೋನ್ ಕಳವಾದರೆ, ಅದನ್ನು ಯಾರಿಂದಲೂ ಬಳಸಲಾಗದ ಒಂದು ತಂತ್ರಜ್ಞಾನವನ್ನು ಅಳವಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಬೇರೆಯೇ ಸಿಮ್ ಕಾರ್ಡ್ ಹಾಕಿದರೂ ಕಳವಾದ ಫೋನ್ ಮತ್ತೆ ಕೆಲಸ ಮಾಡದಂತೆ ತಡೆಯುವ ತಂತ್ರಜ್ಞಾನವಿದು. ಕೇಂದ್ರೀಯ ಉಪಕರಣ ಗುರುತಿನ ರಿಜಿಸ್ಟರ್ (ಸಿಇಐಆರ್) ಎಂಬ ದತ್ತಾಂಶ ಸಂಗ್ರಹಣೆಯ ಮೂಲಕ ಇದು ಸಾಧ್ಯವಾಗಲಿದ್ದು, ಪುಣೆಯಲ್ಲಿ ಬಿಎಸ್ಸೆನ್ನೆಲ್ ಮೂಲಕ ಈ ಕುರಿತ ಪೈಲಟ್ ಯೋಜನೆ ಚಾಲನೆಯಾಗಲಿದೆ. ನಂತರ ನಿಧಾನವಾಗಿ ದೇಶಾದ್ಯಂತ ಎಲ್ಲ ಮೊಬೈಲ್ ಫೋನುಗಳ ರಿಜಿಸ್ಟ್ರಿ ರೂಪುಗೊಳ್ಳಲಿದೆ.
ಇವನ್ನೂ ನೋಡಿ
ಫೋನ್ನ ಬ್ಯಾಟರಿ ಬೇಗನೇ ಚಾರ್ಜ್ ಆಗುತ್ತಿಲ್ಲವೇ? ಇತ್ತ ಗಮನಿಸಿ…
ಇಂಟರ್ನೆಟ್ ಬಳಕೆಯಾಗುವ ಸ್ಮಾರ್ಟ್ಫೋನ್ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಅಲ್ಲದೆ, ಕೆಲವರಿಗಂತೂ ಚಾರ್ಜಿಂಗ್ನದ್ದೇ ಚಿಂತೆ. ಎರಡು-ಮೂರು ಗಂಟೆ ಫೋನನ್ನು ಚಾರ್ಜರ್ಗೆ ಸಂಪರ್ಕಿಸಿಟ್ಟರೂ ಶೇ.50 ಕೂಡ ಚಾರ್ಜ್ ಆಗಿರುವುದಿಲ್ಲ ಅಂತ ಹಲವರು ಹೇಳಿರುವುದನ್ನು ಕೇಳಿದ್ದೇನೆ. ಇಂತಹಾ ಸಮಸ್ಯೆ...



