ಕಳವಾದ ಅಥವಾ ಎಲ್ಲೋ ಕಳೆದು ಹೋದ ಫೋನ್ಗಳು ಮರಳಿ ಸಿಗುವುದು ತೀರಾ ತ್ರಾಸದಾಯಕ. ಆದರೆ ಅವುಗಳಲ್ಲಿರುವ ಅಮೂಲ್ಯ ಮಾಹಿತಿಯದ್ದೇ ಚಿಂತೆ. ಫೋನ್ ಸಿಗದಿದ್ದರೂ ಪರವಾಗಿಲ್ಲ, ಅದರೊಳಗಿರುವ ಮಾಹಿತಿಯು ಕಳ್ಳರ ಪಾಲಾಗಬಾರದು ಎಂದುಕೊಳ್ಳುವವರೂ ಇದ್ದಾರೆ. ಇದೀಗ ಯಾವುದೇ ಸ್ಮಾರ್ಟ್ ಫೋನ್ ಕಳವಾದರೆ, ಅದನ್ನು ಯಾರಿಂದಲೂ ಬಳಸಲಾಗದ ಒಂದು ತಂತ್ರಜ್ಞಾನವನ್ನು ಅಳವಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಬೇರೆಯೇ ಸಿಮ್ ಕಾರ್ಡ್ ಹಾಕಿದರೂ ಕಳವಾದ ಫೋನ್ ಮತ್ತೆ ಕೆಲಸ ಮಾಡದಂತೆ ತಡೆಯುವ ತಂತ್ರಜ್ಞಾನವಿದು. ಕೇಂದ್ರೀಯ ಉಪಕರಣ ಗುರುತಿನ ರಿಜಿಸ್ಟರ್ (ಸಿಇಐಆರ್) ಎಂಬ ದತ್ತಾಂಶ ಸಂಗ್ರಹಣೆಯ ಮೂಲಕ ಇದು ಸಾಧ್ಯವಾಗಲಿದ್ದು, ಪುಣೆಯಲ್ಲಿ ಬಿಎಸ್ಸೆನ್ನೆಲ್ ಮೂಲಕ ಈ ಕುರಿತ ಪೈಲಟ್ ಯೋಜನೆ ಚಾಲನೆಯಾಗಲಿದೆ. ನಂತರ ನಿಧಾನವಾಗಿ ದೇಶಾದ್ಯಂತ ಎಲ್ಲ ಮೊಬೈಲ್ ಫೋನುಗಳ ರಿಜಿಸ್ಟ್ರಿ ರೂಪುಗೊಳ್ಳಲಿದೆ.
ಇವನ್ನೂ ನೋಡಿ
ತುತ್ತು ಅನ್ನ, ಬೊಗಸೆ ನೀರು, ಮತ್ತೊಂದು ನ್ಯಾನೋ ಕಾರು!
ಕೈಗೆಟಕುವ ಸಣ್ಣ ಕಾರುಗಳ ಜಗತ್ತಿನ ಹೆಬ್ಬಾಗಿಲನ್ನು ಭಾರತೀಯ ಕಂಪನಿಯೊಂದು ತೆರೆದುಬಿಟ್ಟಿದೆ. ಹಲವು ನಿರೀಕ್ಷೆಗಳ ಬಳಿಕ ಗುರುವಾರ ಜನಸಾಮಾನ್ಯನೊಬ್ಬ ಕೂಡ ಕಾರು ಖರೀದಿಸುವ ಕನಸು ಕಂಡಿದ್ದಾನೆ, ಮನಸೂ ಮಾಡುತ್ತಿದ್ದಾನೆ. ಈ ಕನಸು ನನಸಾಗಿಸಲು ನೆರವಾಗಿದ್ದು...