ಇತ್ತೀಚೆಗೆ ಟೆಲಿಕಾಂ ಕಂಪನಿಗಳ ನಡುವಿನ ಸಂಪರ್ಕಕ್ಕೆ ಇದ್ದ ಅಂತರ್-ಸಂಪರ್ಕ ಶುಲ್ಕವನ್ನು (ಐಯುಸಿ- ಇಂಟರ್-ಕನೆಕ್ಟ್ ಯೂಸೇಜ್ ಚಾರ್ಜ್) ಕಡಿತಗೊಳಿಸಿದ ಸುದ್ದಿ ಓದಿದ್ದೀರಿ. ಇದರಿಂದ ಕರೆ ದರಗಳು ಮತ್ತಷ್ಟು ಅಗ್ಗವಾಗುವ ನಿರೀಕ್ಷೆ ಇದೆ. ಏನಿದು ಅಂತ ಗೊತ್ತೇ? ಒಂದು ಟೆಲಿಕಾಂ ಕಂಪನಿಯ ಕರೆಯೊಂದು ಬೇರೊಂದು ಟೆಲಿಕಾಂ ಸೇವಾದಾತ ಕಂಪನಿಯ ನೆಟ್ವರ್ಕ್ಗೆ (ಸುಲಭವಾಗಿ ಉದಾಹರಣೆ ಹೇಳುವುದಿದ್ದರೆ, ಏರ್ಟೆಲ್ನಿಂದ ಜಿಯೋಗೆ) ಹೋಗುತ್ತದೆಯೆಂದಾದರೆ, ಅದಕ್ಕೆ ಮೊದಲನೆ ಕಂಪನಿಯು ಎರಡನೇ ಕಂಪನಿಗೆ ನಿಮಿಷಕ್ಕೆ ಇದುವರೆಗೆ 14 ಪೈಸೆ ಕೊಡಬೇಕಾಗುತ್ತಿತ್ತು. ಈಗ ಅದನ್ನು 6 ಪೈಸೆಗೆ ಇಳಿಸಲಾಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಯೋಜನೆಯ ಪ್ರಕಾರ, 2020ರಲ್ಲಿ ಇದು ಶುಲ್ಕರಹಿತವಾಗಲಿದೆ. ಆದರೆ, ಟೆಲಿಕಾಂ ಸೇವಾ ಕಂಪನಿಗಳು ಯಾರ ಕರೆ ಎಲ್ಲಿಗೆ ಹೋಯಿತು ಎಂಬುದರ ದಾಖಲೆ ಇರಿಸಿಕೊಳ್ಳಬೇಕಾಗುತ್ತದೆ.
ಇವನ್ನೂ ನೋಡಿ
ಮತದಾರರಿಗೆ ನೀಡಿದ ಭರವಸೆಗಳು ಗಾಳಿಯಲ್ಲಿ!
ಚುನಾವಣಾ ಫಲಿತಾಂಶಗಳು ಮತ್ತೊಂದು ಅತಂತ್ರ ವಿಧಾನಸಭೆಯನ್ನು ಸೃಷ್ಟಿಸುವುದು ಹೆಚ್ಚಿನ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ. ಅದು ಹಾಗಾದರೆ, ಓಟಿಗಾಗಿ ಕೋಟಿ ಕೋಟಿ ಖರ್ಚು ಮಾಡಿ ಅಧಿಕಾರ ಸಿಗದವರು ಸುಮ್ಮನಿರುತ್ತಾರೆಯೇ? ಅಥವಾ ಹೇಗಾದರೂ ಮಾಡಿ ಸರಕಾರವೊಂದನ್ನು ಸ್ಥಾಪಿಸದಿರಲು ಅವರೇನು ಪೆದ್ದರೇ? ಖಂಡಿತಾ ಅಲ್ಲ. ಮತ್ತೆ ಮೈತ್ರಿಗೆ ಮುಂದಾಗುತ್ತಾರೆ. 'ಜನತೆಯ ಮೇಲೆ ಚುನಾವಣೆ ಹೇರಲು ನಮಗೆ ಇಷ್ಟವಿಲ್ಲ, ಅದಕ್ಕೆ ಈ ಮೈತ್ರಿ ಅನಿವಾರ್ಯ' ಎಂಬ ರಾಜಕೀಯ ಕ್ಷೇತ್ರದಲ್ಲಿ ಹಳಸಿಹೋದ ವಾಕ್ಯವೊಂದು ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತದೆ. ಇದು ವ್ಯವಸ್ಥೆಯ ವ್ಯಂಗ್ಯ.