Tag: KarnatakaOne
ಇವನ್ನೂ ನೋಡಿ
ರಂಗಮಂಟಪವಿಲ್ಲದಿದ್ದರೇನಂತೆ, ‘ಮಾತಿನ ಮಂಟಪ’ಕ್ಕೆ ಬಂದಿದ್ದಾರೆ ಯಕ್ಷಗಾನ ಕಲಾವಿದರು
ಕಲೆ, ಕಲಾವಿದರಿಗೆ ಈ ಕೋವಿಡ್ ಎಂಬ ಮಾಯಾವಿ ತಂದಿತ್ತ ಸಂಕಷ್ಟ ಅಷ್ಟಿಷ್ಟಲ್ಲ. ಅವಿಚ್ಛಿನ್ನವಾಗಿ ಬೆಳಗುತ್ತಿದ್ದ ಪ್ರದರ್ಶನ ಕಲೆಯೊಂದು ಇದ್ದಕ್ಕಿದ್ದಂತೆ ಕೊರೊನಾಘಾತಕ್ಕೆ ಸಿಲುಕಿ, ನಿಂತು ಹೋಗಬೇಕಾದ ಪರಿಸ್ಥಿತಿ. ಆದರೆ ಯಕ್ಷಗಾನ ಕಲೆ ನಿಂತ ನೀರಾಗಲಿಲ್ಲ. ಹಲವಾರು ಸಂಘ ಸಂಸ್ಥೆಗಳ ಯಕ್ಷ ಮನಸ್ಸುಗಳು ಆನ್ಲೈನ್ನಲ್ಲೇ ಯಕ್ಷಗಾನವನ್ನು ಬೆಳೆಸಿದವು. ಇದಕ್ಕೀಗ ಕೈಜೋಡಿಸಿದೆ ಕರ್ನಾಟಕ ಯಕ್ಷಗಾನ ಅಕಾಡೆಮಿ.

