ಮೊದಲು ಆ ಎರಡು ವಿಷಯಗಳ ಬಗ್ಗೆ…
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಆಸ್ಥೆಯಿಂದ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ‘ವಿಜ್ಞಾನ ತಂತ್ರಜ್ಞಾನ’ಕ್ಕೂ ಅವಕಾಶ ಸಿಕ್ಕಿರುವುದು, ಬಹುಶಃ ಈ ಬರವಣಿಗೆಯ ಚರಿತ್ರೆಯಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಿಕ್ಕ ಮೊದಲ ಮಾನ್ಯತೆಯಿರಬಹುದೇನೋ. ಅಂಥಹಾ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ 17 ಸಂಪುಟಗಳಲ್ಲಿ 14ನೇ ಸಂಪುಟವೇ ವಿ
700 ಪುಟಗಳ ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಅಂಗವಾಗಿ ಹೊರಬಂದಿದ್ದು, ಶ್ರವಣಬೆಳಗೊಳದಲ್ಲಿ ನಡೆದಿರುವ 81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿದೆ. ನನ್ನ ಲೇಖನವಿರುವುದು ಸಾಮಾಜಿಕ ಜಾಲತಾಣಗಳು ಮತ್ತು ಸಾಮಾಜಿಕ ಪರಿಣಾಮದ ಕುರಿತು. ಇದೊಂದು ಸಂಭ್ರಮ ಮತ್ತು ಗೌರವವೆಂಬ ಹೆಮ್ಮೆ. ತಂತ್ರಜ್ಞಾನವೇನೂ ನಿಂತ ನೀರಲ್ಲ; ಅದು ಹರಿಯುತ್ತಿರುವ ತೊರೆ. ಕ್ಷಣಕ್ಷಣಕ್ಕೆ ಬದಲಾಗುತ್ತಿರುತ್ತದೆ. ಹೀಗಾಗಿ ಐದಾರು ತಿಂಗಳ ಹಿಂದೆಯೇ ತಯಾರಿಸಿಕೊಟ್ಟಿದ್ದ ಲೇಖನದಲ್ಲಿನ ಕೆಲವು ಅಂಶಗಳು ಸಾಕಷ್ಟು ಅಪ್ಡೇಟ್ ಆಗಿದ್ದಿರಬಹುದು. 🙂 ಒಟ್ಟಿನಲ್ಲಿ ಟಿ.ಆರ್.ಅನಂತರಾಮು ಸಂಪಾದಕತ್ವದ ಈ ಸಂಗ್ರಹಯೋಗ್ಯ ಸಂಪುಟದಲ್ಲಿ ನನ್ನ ಹೆಸರು ನನಗೆ ಹೆಮ್ಮೆಯ ವಿಷಯ.
ಎರಡನೇ ವಿಷಯವೆಂದರೆ, ಸಾಹಿತ್ಯ ಸಮ್ಮೇಳನದಲ್ಲಿ ತಂತ್ರಜ್ಞಾನ ಮತ್ತು ಕನ್ನಡಕ್ಕೆ ಸಂಬಂಧಿಸಿದಂತೆ ಭರಪೂರ ಮೇವು ಸಿಗುತ್ತದೆ, ಹೋಗಬೇಕು ಅಂತಂದುಕೊಂಡಿದ್ದೆನಾದರೂ,
ಅವ್ಯವಸ್ಥೆಯ ಬಗ್ಗೆ
ಭಾಗವಹಿಸಿದ್ದು ಹೆಮ್ಮೆಯಾದರೂ, ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಸರಕಾರವು ನಾವೇ ಕಟ್ಟಿದ ತೆರಿಗೆ ಹಣವನ್ನು ಈ ಪ್ರಮಾಣದಲ್ಲಿ ಖರ್ಚು ಮಾಡುತ್ತಿರುವಾಗ, ಅದರ ಸಾರ್ಥಕ್ಯದ ಬಗ್ಗೆ ಶಂಕೆ ಮೂಡುವಷ್ಟು ಅವ್ಯವಸ್ಥೆ. ಪುಟಾಣಿ ಮಕ್ಕಳ ಅಚ್ಚುಕಟ್ಟಾದ ನೃತ್ಯವೈವಿಧ್ಯಗಳು ಗಮನ ಸೆಳೆದವು. ಕಲಾವಿದರಿಗೆ ಕುಡಿಯಲು ನೀರಿನ ವ್ಯವಸ್ಥೆಯೂ ಇಲ್ಲ, ಗ್ರೀನ್ ರೂಂ ವ್ಯವಸ್ಥೆಯೂ ಇಲ್ಲ. ನೂರಾರು ಮಕ್ಕಳು ಎಲ್ಲೆಲ್ಲಿಯೋ ವೇಷ ಹಾಕಿಕೊಂಡು ಬರುತ್ತಿದ್ದರು ಮತ್ತು ಅವರಿಗೆ ನಿಲ್ಲುವುದಕ್ಕೂ ಜಾಗದ ವ್ಯವಸ್ಥೆ ಇರಲಿಲ್ಲ. ಧೂಳು ಧೂಳು ಧೂಳು. ಸಾಲದ್ದಕ್ಕೆ ಮೊಬೈಲ್ ಸಿಗ್ನಲ್ ಜಾಮರ್ ಅಳವಡಿಸಿದ್ದರೇನೋ ಎಂಬ ಶಂಕೆಯೂ ಮೂಡಿತು. ಊಟದ ವ್ಯವಸ್ಥೆಯೂ ಅಷ್ಟೇ. ಭಾನುವಾರ ಜನ ಜಾಸ್ತಿ ಬರ್ತಾರೆ. ಎಲ್ಲಿ ಕ್ಯೂ ನಿಲ್ಲುವುದು ಅನ್ನೋ ಬಗ್ಗೆ ಸಮರ್ಪಕ ಮಾಹಿತಿಯಿಲ್ಲದೆ, ಗೊಂದಲ. ಕೊನೆಗೂ ಕ್ಯೂ ಹಿಡಿದು, ಇಪ್ಪತ್ತೈದು ನಿಮಿಷ ನಿಂತಾಗಲೂ ಮುಂದೆ ಹೋಗಲಾಗಲಿಲ್ಲ. ಕಾರ್ಯಕ್ರಮಕ್ಕೆ ತಡವಾಗುತ್ತದೆಯೆಂಬ ಕಾರಣಕ್ಕೆ ಕ್ಯೂ ಮುರಿದು, ಹೊರಬಂದು ವೇದಿಕೆಯತ್ತ ಹೋಗಬೇಕಾಯಿತು. ಆ ದಾರಿಯಲ್ಲಿ ಬಿಸ್ಕತ್ತು, ಚುರುಮುರಿ.
ಮೂಡುಬಿದಿರೆಯಲ್ಲಿ ಪ್ರತಿವರ್ಷ ಕನ್ನಡ ಜಾತ್ರೆ ನಡೆಯುತ್ತದೆ. ಚೆನ್ನೈಯಲ್ಲಿದ್ದಾಗಲೂ ಮೂರು ವರ್ಷ ನಿರಂತರವಾಗಿ ‘ನುಡಿಸಿರಿ’ಗೆ ಬಂದಿದ್ದೆ. ಅಚ್ಚುಕಟ್ಟುತನ, ಆಯೋಜಕರು ಸಮಯಕ್ಕೆ ಕೊಡುವ ಮಹತ್ವ… (ಯಾವುದೇ ರಾಜಕಾರಣಿ ಬಂದರೂ, ನಿಗದಿತ ಸಮಯದಲ್ಲಿ ಮಾತು ನಿಲ್ಲಿಸದಿದ್ದರೆ, ಪ್ರೀತಿಪೂರ್ವಕವಾಗಿಯೇ ಸಮಯ ಮೀರುತ್ತಿದೆ ಎಂಬ ಸಂದೇಶ ರವಾನೆಯಾಗುತ್ತಿತ್ತು.) ಇದೆಲ್ಲ ನೆನಪಾಗಿ, ಸರಕಾರಿ ಕಾರ್ಯಕ್ರಮ ಇಷ್ಟೇನಾ ಎಂಬೊಂದು ವಿಷಾದ ಭಾವ.
ಕನ್ನಡದ ಹಬ್ಬವನ್ನು ಆಯೋಜಿಸುವಾಗ ಏನೆಲ್ಲಾ ಅವ್ಯವಸ್ಥೆಗಳು ಇರಬಾರದು, ಯಾವುದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ನುಡಿಹಬ್ಬದ ಮುಂದಿನ ಆಯೋಜಕರಿಗೆ ಪಾಠ ಕಲಿಸಲಾಗಿದೆ ಎಂದಷ್ಟೇ ಹೇಳಬಲ್ಲೆ. ಸಮಯದ ಬಗ್ಗೆ ಹೆಚ್ಚು ಗಮನ ಹರಿಸುವ, ಪರವೂರಿನಿಂದ ಬಂದಿರುವ ಕಲಾವಿದರಿಗೆ ನೀರಿಗೆ ವ್ಯವಸ್ಥೆ ಮಾಡಬಹುದಿತ್ತು. ಕನ್ನಡಕ್ಕಾಗಿ ರಕ್ತ ಕೊಟ್ಟೇವು, ಆದರೆ ನೀರನ್ನೂ ಕೊಟ್ಟೇವು ಎನ್ನುವವರೂ ಇರಬೇಕಿತ್ತು 🙂
ಏನೇ ಆದರೂ, ನಮ್ಮ ಕನ್ನಡ ಹಬ್ಬ, ಜನರೆಲ್ಲ ಎಲ್ಲವುಗಳನ್ನೂ ಮರೆತು ಸಾವಿರ ಸಾವಿರ ಸಂಖ್ಯೆಯಲ್ಲಿ ಸಂಭ್ರಮದಿಂದಲೇ ಸೇರಿದ್ದರು. ಹೀಗಿರುವಾಗ ಈ ನುಡಿಯ ಹಬ್ಬದಲ್ಲಿ ನಾವೇಕೆ ಕೊಂಕು ನುಡಿಯಬೇಕು? ನಮ್ಮೆಲ್ಲರ ಕನ್ನಡ ಮನಸ್ಸುಗಳನ್ನು ಏಕೀಭವಿಸಿದ ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನಕ್ಕೆ ಜೈ!
iPhone 16e joins the iPhone 16 lineup, featuring the fast performance of the A18 chip,…
ರಿಯಲ್ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ರಿಯಲ್ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್ಶಿಪ್ ಚಿಪ್ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ರಿಯಲ್ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…