Categories: myworldOpinion

ಮೌನವಾಗಿ ತಣಿಸುತ್ತಿದೆ ಮನ- ಮರೀನಾ

ಕಾಲ ಎನ್ನುವುದು ಎಲ್ಲ ಬೇಸರಗಳನ್ನು ಎಷ್ಟು ಬೇಗನೆ ಕಳೆದುಬಿಡುತ್ತದಲ್ಲ…!

ಹೀಗೆಯೇ ಬೇಸರ ಕಳೆಯಲು ಚೆನ್ನೈಯ ಮರೀನಾ ಬೀಚಿಗೆ ಹೋಗಿದ್ದೆ.

ಶನಿವಾರ ಸಂಜೆ ಆದುದರಿಂದ ಹೆಚ್ಚಿನ ಐಟಿ ಕಂಪನಿಗಳಿಗೆ ರಜೆ. ಬಹುಶಃ ಅದೇ ಕಾರಣಕ್ಕೆ ಬೀಚಿಗೆ ಹೋಗುವ ಕೆಥಡ್ರಲ್ ರೋಡ್‌ನಲ್ಲಿ ಬೈಕಲ್ಲಿ ಸಾಗುವುದೇ ಒಂದು ರೀತಿಯ ಮಜಾ. ಸ್ಲೋ ಸೈಕಲ್ ರೇಸ್ ಅಂತ ಚಿಕ್ಕದಿರುವಾಗ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಬಹುಶಃ ಇಲ್ಲಿ ಬೈಕ್ ರೈಡ್ ಮಾಡೋಕೆ ಒಳ್ಳೆ ಸಹಾಯಕ್ಕೆ ಬಂತು. ಎಷ್ಟು ಸಾಧ್ಯವೇ ಅಷ್ಟು ಸ್ಲೋ ಹೋಗಬೇಕಾಗುತ್ತದೆ.

ಪಕ್ಕದಲ್ಲೇ ಕಿಲ ಕಿಲ ನಗುವಿನ, ತಬ್ಬಿಕೊಂಡೇ ಬೈಕಲ್ಲಿ ಕುಳಿತುಕೊಂಡು ಪ್ರಪಂಚ ಮರೆತು ಸಮುದ್ರತೀರವೆಂಬ ಮಾಯಾಲೋಕದತ್ತ ಆಮೆನಡಿಗೆಯಲ್ಲಿ ಧಾವಿಸುವ ಯುವ ಜೋಡಿ, ಎದುರಿನಿಂದ ಬರುವ ರಸ್ತೆಯಲ್ಲಿ ರೊಯ್ಯನೇ ಧಾವಿಸಿ, ಬೀಚ್ ವೀಕ್ಷಣೆ ಮುಗಿಸಿ ಮರಳುತ್ತಿರುವ ಜೋಡಿ ಹಕ್ಕಿಗಳು…. ಇವನ್ನೆಲ್ಲಾ ಆರಾಮವಾಗಿ ನೋಡುತ್ತಾ ಸಾಗಬಹುದು. ಬೀಚಿನತ್ತ ಹೋಗುವ ರಸ್ತೆ ವಾಹನಗಳಿಂದ ಗಿಜಿಗುಟ್ಟುತ್ತಿದ್ದರೆ, ಬರುವ ರಸ್ತೆಯಲ್ಲಿ ಒಂಥರಾ ವಾಹನಗಳಿಲ್ಲದ ಕಾರಣ Free way.

ಅಂತೂ ಬೀಚ್ ತಲುಪಿದಾಗ ಸಮುದ್ರದ ಭೋರ್ಗರೆತ ಕೇಳಿದಾಗ ಥಟ್ಟನೆ ನೆನಪಾದದ್ದು ಸುನಾಮಿ. ವರ್ಷದ ಹಿಂದೆ ಕಾಡಿದ ಇದೇ ಸಮುದ್ರದ ಅಲೆಗಳು ಎಷ್ಟೊಂದು ಜೀವಗಳನ್ನು ಅಯಾಚಿತವಾಗಿ, ಅಚಾನಕ್ಕಾಗಿ ತನ್ನೊಳಗೆ ಸೆಳೆದುಕೊಂಡಿತಲ್ಲ… ದೇಶ ವಿದೇಶಗಳಲ್ಲಿ ಮರೀನಾ ಬೀಚ್ ಹೆಸರು (ಕು)ಖ್ಯಾತಿ ಪಡೆಯಲು ಕಾರಣವಾಯಿತಲ್ಲ….

ಆದರಿಂದು ಅದೇ ಬೀಚು ಏನೂ ಆಗದಂತೆ ತಣ್ಣನೆ ಗಾಳಿ ಬೀಸುತ್ತಾ, ತನ್ನತ್ತ ಬರುವವರಿಗೆ ತಂಪಿನ ಸಿಂಚನ ನೀಡುತ್ತಿದೆ. ಚೆನ್ನೈಯ ಬಿಸಿಲಿಗೆ ಬಸವಳಿದವರಿಗೆ ವೀಕೆಂಡ್ ಕಳೆಯಲು ಇದೇ ಬೀಚ್ ಬೇಕು.

ಜನ ಮರೆತಿದ್ದಾರೆ ಈ ಸಮುದ್ರರಾಜನ ಕೋಪವನ್ನು…. ಮತ್ತದೇ ಬೀಚಿಗೆ ಮನೋವ್ಯಾಕುಲತೆಯನ್ನೋ, ನಿರಾಶೆಗಳ ಗಂಟನ್ನೋ ಕಳೆದು ಬಿಸಾಡಲು ಬರುತ್ತಿದ್ದಾರೆ. ವಾರವಿಡೀ ದಣಿವರಿಯದ ದುಡಿತದಿಂದ ಕೊಂಚ ‘ಬದಲಾವಣೆ’ ಇರಲಿ ಅಂತ ಬಂದ ದಣಿದ ಮೈ ಮನಗಳಿಗೆ ಸಾಂತ್ವನ ನೀಡುತ್ತಿದ್ದಾನೆ ಸಮುದ್ರ ರಾಜ. ಬಿಸಿಲಿನ ಬೇಗೆಯಿಂದ ದಣಿದ ತನುವಿಗೂ, ಏನೇನೋ ಯೋಚಿಸುತ್ತಾ ಕೆಡಿಸಿಕೊಂಡ ಮನಕ್ಕೂ ತಣ್ಣನೆಯ ಗಾಳಿಯ ಸಿಂಚನ….

ಕಾಲ ಎನ್ನುವುದು ಎಲ್ಲ ಬೇಸರಗಳನ್ನು ಎಷ್ಟು ಬೇಗನೆ ಕಳೆದುಬಿಡುತ್ತದಲ್ಲ…!

Comment problem solve ಆಗಿಲ್ಲ. ಆದುದರಿಂದ ದಯವಿಟ್ಟು ಈ ಲಿಂಕ್ ಕ್ಲಿಕ್ಕಿಸಿ.:

http://avisthoughts.wordpress.com/current-affairsಪ್ರಚಲಿತ/

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಜೋಡಿ ಹಕ್ಕಿಗಳನ್ನು ನೋಡಿದಾಗ ಒಂಟಿ ಬೇಜಾರಾಗತ್ತೆ ಅಲ್ವಾ?

    ಜೋಡಿ ಬೇಡೋ ಕಾಲವಮ್ಮ - ನೀವು ಗಂಟು ಹಾಕುವ ದಿನದ ನಿರೀಕ್ಷೆಯಲ್ಲಿರುವೆ

  • ಶ್ರೀನಿವಾಸರೆ,
    ಒಂಟಿ ಜೀವನಕ್ಕಿಂತ ಜಂಟಿ ಜೀವನವೇ ಲೇಸು ಅನ್ನೋದರಲ್ಲಿ ನಾನ್ಯಾವತ್ತೋ ನಂಬಿಕೆ ಇಟ್ಟಾಗಿದೆ. ಇನ್ನೇನಿದ್ದರೂ ಗಂಟು ಬಿಚ್ಚಿ ಕರಗಿಸುವುದು... :P

Recent Posts

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

1 week ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

1 month ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

7 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

7 months ago

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

9 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

9 months ago