ಈ ಪೀಠಿಕೆ ಯಾಕೆಂದರೆ, ಭರ್ತಿ ಆರು ವರ್ಷ ಚೆನ್ನೈಯಲ್ಲೇ ಇದ್ದರೂ, ಹಲವಾರು ಬಾರಿ ಮನದ ದುಗುಡ ಕಳೆಯಲೆಂದು ಸಮುದ್ರ ತೀರಕ್ಕೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದರೂ, ರಾಧಾಕೃಷ್ಣನ್ ಸಾಲೈ (ಟಿಟಿಕೆ ರೋಡ್) ನಲ್ಲೇ ಇರುವ ಮ್ಯೂಸಿಕ್ ಅಕಾಡೆಮಿಯತ್ತ ಕಣ್ಣು ಹಾಯಿಸಿದ್ದೆನಷ್ಟೇ, ಅದೇನೇನೋ ಕನಸುಗಳಲ್ಲಿದ್ದವು, ನಿರೀಕ್ಷೆ ಇದ್ದಿತ್ತು. ಆದರೆ, ಚೆನ್ನೈ ಬಿಟ್ಟು ಬಂದ ನಾಲ್ಕು ವರ್ಷಗಳ ತರುವಾಯ ಆ ಒಂದು ದಿನ ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯ.
ಅದು ಕೂಡ ಕರ್ನಾಟಕ ಸಂಗೀತ ಲೋಕದ ದಿಗ್ಗಜರೆದುರು ಮ್ಯೂಸಿಕ್ ಅಕಾಡೆಮಿಯ ಆ ಒಂದು ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ಭಾಗವಾಗುವ ಯೋಗ ನನ್ನದಾಗಿತ್ತು. ಈ ಕಾರಣಕ್ಕಾಗಿ, ಸಿಕ್ಕಿದ ಅವಕಾಶ ಬಿಡಬಾರದೆಂದು, ಒಂದೇ ದಿನ ರಜೆ ಹಾಕಿ ಕ್ರಿಸ್ಮಸ್ ಮುನ್ನಾದಿನ ಚೆನ್ನೈಗೆ ಹೋಗಿ ಬಂದೆ.
ಡಿಸೆಂಬರ್ ಎಂದರೆ ಮಾರ್ಗಳಿ ಮಾಸ (ಮಾರ್ಗಶಿರ ತಿಂಗಳು); ಚೆನ್ನೈ ತಂಪಾಗುವ ಸಮಯವದು. ಈ ವರ್ಷ ತಿಂಗಳಾರಂಭದ ಭಾರೀ ಮಳೆ ತಂದ ಅನಾಹುತದಿಂದಾಗಿ ಮುಳುಗಿ ಚೆನ್ನೈಯಿನ್ನೂ ನಿಧಾನವಾಗಿ ಕಣ್ಣು ತೆರೆದುಕೊಳ್ಳುತ್ತಿದೆಯಷ್ಟೇ. ಈ ಮಾಸವು ಇದ್ದಬದ್ದ ವೇದಿಕೆಗಳಲ್ಲೆಲ್ಲಾ ಕರ್ನಾಟಕ ಶಾಸ್ತ್ರೀಯ ಸಂಗೀತದ ಆಲಾಪನೆಗಳು, ಮೃದಂಗದ ನುಡಿಗಳು, ಘಟಂ ಪೆಟ್ಟುಗಳು, ಕೊನ್ನಕ್ಕೋಲು, ಕಂಜಿರ, ಪಿಟೀಲು, ವೀಣೆ, ಕೊಳಲಿನ ಧ್ವನಿಗಳು ಕೇಳಿಬರುವ ಕಾಲ. ತಿಂಗಳೊಂದಲ್ಲ, ಎರಡು ತಿಂಗಳಿಗೂ ಮಿಕ್ಕಿ ಕೆಲವು ಕಡೆ ಈ ರೀತಿಯ ಸಂಗೀತೋತ್ಸವಗಳು ಮುಂದುವರಿಯುತ್ತವೆ. ಒಳಗಿದ್ದುಕೊಂಡೂ ವೃತ್ತಿಯೊತ್ತಡದಿಂದಾಗಿ ಸಂಭ್ರಮಿಸಲಾಗದಿದ್ದ ನಾನು, ಈ ಸಂಭ್ರಮ ಕಾಲದಲ್ಲಿ ಚೆನ್ನೈಗೆ ಮತ್ತೊಮ್ಮೆ ‘ಹೊರಗಿನವನಾಗಿ’ ಹೋಗಿ ಬಂದೆ.
‘ಯಕ್ಷಗಾನದಲ್ಲಿ ತಾಳಗಳು’ ಎಂಬ ಕುರಿತಾಗಿ ಉಪನ್ಯಾಸ-ಪ್ರಾತ್ಯಕ್ಷಿಕೆ ಅವರದು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಲವು ಪ್ರಯೋಗಗಳನ್ನು ಮಾಡಿದವರಾಗಿದ್ದರೂ, ಕೆಲವೇ ದಿನಗಳಲ್ಲಿ ಯಕ್ಷಗಾನದ ಶೈಲಿಯಲ್ಲಿ ಹಾಡುಗಳನ್ನು ಕರಗತವಾಗಿಸಿಕೊಂಡು, ಈ ಅಪರೂಪದ ಉಪನ್ಯಾಸ ಕಾರ್ಯಕ್ರಮಕ್ಕೆ ತಯಾರು ಮಾಡಿಕೊಂಡುಬಿಟ್ಟಿದ್ದರು.
ಬೆಳ್ಳಂಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ಆರಂಭವಾದಾಗ ಸಭಾಸದರ ಸಂಖ್ಯೆ ಕಡಿಮೆ ಇತ್ತು. ಐದು-ಹತ್ತು ನಿಮಿಷದಲ್ಲಿ ಮಿನಿ ಹಾಲ್ ತುಂಬಿಕೊಂಡಿತು. ಎದುರಿನ ಸಾಲಿನಲ್ಲಿ ಕುಳಿತಿದ್ದವರಾದರೂ ಯಾರು? ಕರ್ನಾಟಕ ಸಂಗೀತ ಲೋಕ ಕಂಡ ಮೇರು ಕಲಾವಿದ, ಕಲೈಮಾಮಣಿ ಟಿ.ವಿ.ಗೋಪಾಲಕೃಷ್ಣನ್. ಅವರನ್ನು ನೋಡಿದ ತಕ್ಷಣ ಕರಗಳು ಅಯಾಚಿತವಾಗಿ ಮುಗಿದುಕೊಂಡವು, ನಕ್ಕು ಬಿಟ್ಟೆ, ಆದರೆ ಮನಸ್ಸಿನೊಳಗಂತೂ ಭತ್ತ ಕುಟ್ಟಿದ ಅನುಭವ. ಅಂತಹಾ ಅದ್ಭುತ ಹಾಡುಗಾರ, ಮೃದಂಗವಾದನದ ಸಿಂಧುವಿನ ಎದುರು ನಾನೊಂದು ಬಿಂದುವಾಗಿದ್ದೆ. ಆತಂಕವಾಗತೊಡಗಿತು. ಮಹೇಶ್ ಹಾಡಿಗೆ ನಾನು ಮೃದಂಗಕ್ಕೆ ಮದ್ದಳೆಯ ನುಡಿತಗಳನ್ನು ಅಳವಡಿಸಲು ಹೆಣಗಾಡುತ್ತಾ ನುಡಿಸುವಾಗ, ಅವರ ಕೈಗಳೂ ತಾಳ ಹಾಕುತ್ತಿದ್ದವು! ಉಫ್! ಬೆವೆತುಬಿಟ್ಟೆ.
ಅಷ್ಟೆ, ಬೇರೇನೂ ಯೋಚಿಸಲಾರದಾದೆ. 9ರ ಆಸುಪಾಸಿಗೆ ಕಾರ್ಯಕ್ರಮ ಮುಗಿಸಿದ ಬಳಿಕ ಸಂಗೀತವೆಂಬ ಸಾರಸ್ವತ ಸಭೆಯಿಂದ ಕರತಾಡನ ಮತ್ತು ಶ್ಲಾಘನೆ. ಒಂದಿಷ್ಟು ಸಂದೇಹಗಳಿಗೆ ಸಂವಹನಾತ್ಮಕ ಉತ್ತರ. ಒಂದು ಕಾಲದಲ್ಲಿ ಕೇವಲ ಕನಸನ್ನೇ ಕಂಡು, ಅದನ್ನು ಹಾಗೆಯೇ ಮನದೊಳಗೆ ಮುಚ್ಚಿಟ್ಟುಕೊಂಡಿದ್ದ, ಮ್ಯೂಸಿಕ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನೀಡುವ ಕನಸು ನನಸಾದ ಕ್ಷಣ. ತೃಪ್ತಿ, ಆನಂದ ಮನದೊಳಗಿತ್ತು. ಈ ನೆಪದಲ್ಲಿ ವಾಪಸ್
ಇದಕ್ಕೂ ಹೆಚ್ಚಿನದಾಗಿ, ಚೆನ್ನೈಯೆಂಬ ಸಂಗೀತದ ಮಹಾಸಾಗರದಲ್ಲಿ ಯಕ್ಷಗಾನದ ನಡೆಗಳನ್ನು, ತಾಳಗಳನ್ನು; ಮತ್ತು ಸಂಗೀತ ಲೋಕವು ಕಂಡರಿಯದ ತಾಳ ಬದಲಾವಣೆಯ ಪ್ರಕ್ರಿಯೆಯನ್ನು (ಇದುವೇ ಯಕ್ಷಗಾನದ ವೈಶಿಷ್ಟ್ಯ, ಮಹಾನ್ ವಿದ್ವಾಂಸ ಜೇಸುದಾಸ್ ಅವರೂ ಈ ಬಗ್ಗೆ ಅಚ್ಚರಿಪಟ್ಟಿದ್ದರು) ಪರಿಚಯಿಸಿದ ಹೆಗ್ಗಳಿಕೆಯಲ್ಲಿ ನನ್ನದೂ ಒಂದು ಪಾಲು.
ಯಕ್ಷಗಾನಕ್ಕೂ ಸಂಗೀತಕ್ಕೂ ಬಹುಕಾಲದ ನಂಟಿದೆ. ಈಗ ಸಂಗೀತ ಲೋಕದಲ್ಲಿ ಯಕ್ಷಗಾನದ ಸಾರವನ್ನು ಪರಿಚಯಿಸಿದ್ದಾಗಿದೆ. ಈ ಎರಡು ಅದ್ಭುತ ಕಲೆಗಳ ಮತ್ತಷ್ಟು ಸಾಮೀಪ್ಯದ ನಿರೀಕ್ಷೆಯೊಂದಿಗೆ….
iPhone 16e joins the iPhone 16 lineup, featuring the fast performance of the A18 chip,…
ರಿಯಲ್ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ರಿಯಲ್ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್ಶಿಪ್ ಚಿಪ್ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ರಿಯಲ್ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
View Comments
Liked it!...I stay in Chennai and have visited the venerated Music Academy
ವಾವ್, ಸೂಪರ್ ಸರ್. ಥ್ಯಾಂಕ್ಯೂ
ಪರಿಮಳ ಬಂದು ಭರಣಿ ನೆಕ್ಕಿದ ಅನುಭವವಾಯ್ತು. ನಿಮ್ಮ ಕಲಾಪದ ಚಲಚಿತ್ರ, ಬೇಡ ಕನಿಷ್ಠ ಶ್ರಾವ್ಯ ದಾಖಲೆಯೂ ಇಲ್ಲವೇ?
ಶ್ರಾವ್ಯ ದಾಖಲೆ ಮಾಡಿದ್ದಾರೆ ಸರ್, ಕೇಳಿ ತಿಳಿಸುವೆ.